ಭಾರತದ ವಾಸ್ತುಶಿಲ್ಪ ಹಾಗೂ ಪುರಾಣ ಪ್ರಸಿದ್ಧ ದೇವಾಲಯಗಳು ಸದಾ ಜಗತ್ತಿನ ಗಮನ ಸೆಳೆಯುತ್ತಲೇ ಬಂದಿವೆ. ಇಂತಹ ವಿಸ್ಮಯಗಳ ಸಾಲಿಗೆ ಸೇರಿರುವ ಮತ್ತೊಂದು ಅಪರೂಪದ ದೇವಾಲಯವೆಂದರೆ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿರುವ ಅಚಲೇಶ್ವರ ಮಹಾದೇವ ದೇವಾಲಯ. ಸುಮಾರು 2,500 ವರ್ಷಗಳ ಇತಿಹಾಸ ಹೊಂದಿರುವ ಈ ಪುರಾತನ ಶಿವಾಲಯದಲ್ಲಿ ನಡೆಯುವ ಅಚ್ಚರಿಯ ಘಟನೆ ವಿಜ್ಞಾನಿಗಳಿಗೂ ಗೊಂದಲ ಉಂಟುಮಾಡಿದೆ.
ಇಲ್ಲಿ ಕಂಡುಬರುವ ಬಣ್ಣ ಬದಲಿಸುವ ರಹಸ್ಯ ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ. ಚಂಬಲ್ ನದಿಯ ತೀರದಲ್ಲಿ ಸ್ಥಿತವಾಗಿರುವ ಈ ದೇವಾಲಯದ ಶಿವಲಿಂಗವು ದಿನದ ವೇಳೆಯಂತೆ ಬಣ್ಣ ಬದಲಿಸುವುದೇ ಭಕ್ತರಿಗೆ ಅಚ್ಚರಿ ಮೂಡಿಸುವ ಪ್ರಮುಖ ಕಾರಣ.
ಇದನ್ನು ಓದಿ: ಗರ್ಭಿಣಿ ಬೆಕ್ಕಿನ ಅಪಹರಣ ಮಾಡಿದ್ಧಕ್ಕೆ FIR!!! ಎನಿದು ವಿಚಿತ್ರ ಪ್ರಕರಣ?
ಇದನ್ನು ಓದಿ: ರಾತ್ರಿ ಪಾರ್ಟಿ, ಬೆಳಗ್ಗೆ ಸಾವು..ಮಲಗಿದ್ದಲ್ಲೇ ನಾಲ್ವರು ಯುವಕರ ಸಾವು… ಆ ಶೆಡ್ನಲ್ಲಿ ನಡೆದಿದ್ದೇನು?
ಇದನ್ನು ಓದಿ: ಅತಿಯಾದ ಅಳುವು = ಬಲಹೀನತೆಯ ಲಕ್ಷಣವಲ್ಲ: ಮನೋವಿಜ್ಞಾನ ದೃಷ್ಟಿಕೋಣ
ಮುಂಜಾನೆ ಸಮಯದಲ್ಲಿ ಉದಯಿಸುವ ಸೂರ್ಯನಂತೆ ಕೆಂಪು ಬಣ್ಣದಲ್ಲಿ ಕಾಣಿಸುವ ಲಿಂಗ, ಮಧ್ಯಾಹ್ನ ವೇಳೆಗೆ ಕೇಸರಿ ವರ್ಣ ತಾಳುತ್ತದೆ. ಸಂಜೆ ಸಮಯಕ್ಕೆ ಬಂದಾಗ ಅದೇ ಲಿಂಗವು ಗಂಭೀರವಾದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಬದಲಾವಣೆ ಭಕ್ತರ ಕಣ್ಣೆದುರೇ ನಡೆಯುವುದರಿಂದ ಇದನ್ನು ಪವಾಡವೆಂದು ಭಾವಿಸಲಾಗುತ್ತದೆ.
ಈ ಘಟನೆಯ ಹಿಂದಿರುವ ವೈಜ್ಞಾನಿಕ ಕಾರಣವನ್ನು ತಿಳಿಯಲು ಅನೇಕ ಸಂಶೋಧಕರು ಪ್ರಯತ್ನಿಸಿದ್ದಾರೆ. ಸೂರ್ಯನ ಕಿರಣಗಳ ಪ್ರತಿಫಲನ ಅಥವಾ ಬೆಳಕಿನ ಪರಿಣಾಮದಿಂದ ಹೀಗೆ ಆಗಬಹುದು ಎನ್ನುವ ಊಹೆಯ ಹೊರತಾಗಿ, ಇಂದಿನ ವಿಜ್ಞಾನಕ್ಕೆ ಇದಕ್ಕೆ ಸ್ಪಷ್ಟವಾದ ಪುರಾವೆ ದೊರೆತಿಲ್ಲ. ಇದು ಮಾನವನಿಂದ ನಿರ್ಮಿತ ಕಲಾತ್ಮಕ ವಿನ್ಯಾಸವೋ ಅಥವಾ ಪ್ರಕೃತಿಯ ಅಚ್ಚರಿಯ ಆಟವೋ ಎಂಬ ಪ್ರಶ್ನೆ ಇನ್ನೂ ಉತ್ತರವಿಲ್ಲದೇ ಉಳಿದಿದೆ.
ಪುರಾಣಗಳ ಪ್ರಕಾರ, ವಾರಣಾಸಿ ಶಿವನ ಪ್ರಮುಖ ನಗರವಾಗಿದ್ದರೆ, ಮೌಂಟ್ ಅಬು ಅದರ ಉಪನಗರವಾಗಿತ್ತು ಎಂಬ ನಂಬಿಕೆ ಇದೆ. ಸ್ಕಂದ ಪುರಾಣದಲ್ಲಿ ಈ ಪ್ರದೇಶದ ಮಹತ್ವವನ್ನು ವಿವರಿಸಲಾಗಿದೆ. ಮೌಂಟ್ ಅಬುವಿನ ಸುತ್ತಮುತ್ತ 108ಕ್ಕಿಂತ ಹೆಚ್ಚು ಶಿವನ ದೇವಾಲಯಗಳಿದ್ದು, ಅಚಲಗಢ ಕೋಟೆಯ ಸಮೀಪ ಶಿವನ ಹೆಬ್ಬೆರಳಿನ ಗುರುತುಗಳು ಇರುವುದಾಗಿ ಭಕ್ತರು ನಂಬುತ್ತಾರೆ. ಇದರಿಂದ ಈ ಪ್ರದೇಶದ ಪೌರಾಣಿಕ ಮಹತ್ವ ಮತ್ತಷ್ಟು ಹೆಚ್ಚುತ್ತದೆ.
ಬಣ್ಣ ಬದಲಿಸುವ ಶಿವಲಿಂಗದ ಪವಾಡ ರಾಜಸ್ಥಾನಕ್ಕಷ್ಟೇ ಸೀಮಿತವಲ್ಲ. ದಕ್ಷಿಣ ಭಾರತದ ಕೆಲವು ಪುರಾತನ ದೇವಾಲಯಗಳಲ್ಲಿಯೂ ಇಂತಹ ವಿಶೇಷತೆಯನ್ನು ಕಾಣಬಹುದು. ತಮಿಳುನಾಡಿನ ಶ್ರೀ ಕಲ್ಯಾಣ ಸುಂದರೇಶ್ವರ ದೇವಾಲಯದಲ್ಲಿ ಲಿಂಗವು ದಿನಕ್ಕೆ ಐದು ಬಾರಿ ಬಣ್ಣ ಬದಲಿಸುವುದು ಪ್ರಸಿದ್ಧ. ಕರ್ನಾಟಕದ ಕೋಲಾರದ ಮುಳಬಾಗಿಲು ವಿರೂಪಾಕ್ಷಿ ದೇವಾಲಯದಲ್ಲಿಯೂ ಇದೇ ರೀತಿಯ ವೈಶಿಷ್ಟ್ಯ ಕಂಡುಬರುತ್ತದೆ.
ಉಡುಪಿಯ ಕಾಂತೇಶ್ವರ ದೇವಾಲಯದಲ್ಲಿರುವ ಶಿವಲಿಂಗವೂ ಬಣ್ಣ ಬದಲಿಸುವ ಅಪರೂಪದ ಲಕ್ಷಣ ಹೊಂದಿದೆ. ನಂಬಿಕೆ ಮತ್ತು ವಿಜ್ಞಾನಗಳ ನಡುವಿನ ಚರ್ಚೆಯಲ್ಲಿ ಅಚಲೇಶ್ವರ ಮಹಾದೇವನ ಪವಾಡವೇ ಮೇಲುಗೈ ಸಾಧಿಸಿದಂತೆ ಕಾಣುತ್ತದೆ. ಶ್ರಾವಣ ಮಾಸ ಹಾಗೂ ಶಿವರಾತ್ರಿ ಸಂದರ್ಭಗಳಲ್ಲಿ ಇಲ್ಲಿ ಭಕ್ತರ ದಂಡೇ ಸೇರುತ್ತದೆ. ಈ ಅದ್ಭುತ ಅನುಭವವನ್ನು ಕನಿಷ್ಠ ಒಂದಾದರೂ ಬಾರಿ ಕಣ್ಣಾರೆ ನೋಡಬೇಕು ಎಂಬ ಭಾವನೆ ಭಕ್ತರ ಮನದಲ್ಲಿ ಗಾಢವಾಗಿ ನೆಲಸಿದೆ.
ಇದನ್ನು ಓದಿ: ಇನ್ವರ್ಟರ್ ಬ್ಯಾಟರಿಗೆ ನೀರು ಸೇರಿಸುವ ಸರಿಯಾದ ಸಮಯ ತಿಳಿದಿದೆಯೇ? 90% ಜನರಿಗೆ ಇದು ಗೊತ್ತಿಲ್ಲ!






