ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಹೂತಿಟ್ಟ ಪ್ರಕರಣವು (Dharmasthala burial case) ಎಲ್ಲೆಡೆ ಹುಬ್ಬೇರಿಸುವಂತೆ ಮಾಡಿರುವ ಸಂದರ್ಭದಲ್ಲಿ, ಎಸ್ಐಟಿ (ವಿಶೇಷ ತನಿಖಾ ತಂಡ) ಇಂದು ಎರಡನೇ ದಿನದ ಉತ್ಪನನ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿದೆ ಇಂದು. ಪಾಯಿಂಟ್ ನಂಬರ್ ಎರಡರಲ್ಲಿ ಮಾತ್ರ ಉತ್ಪನನ ಪ್ರಕ್ರಿಯೆ ನಡೆಯಲಿದೆ. ಕೇವಲ ಒಂದು ಪಾಯಿಂಟ್ ನಲ್ಲಿ ಮಾತ್ರ ಉತ್ಪನನ ನಡೆಸಲಿದೆ.
ಈ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯರೊಬ್ಬರ ಹೆಸರು ತನಿಖೆಯಲ್ಲಿ ಕೇಳಬಂದಿದೆ, ಅನಾಮಿಕ ದೂರುದಾರ ಕೊಟ್ಟ ಹೇಳಿಕೆಯ ಮೆರೆಗೆ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ಈ ಪ್ರಕರಣದಲ್ಲಿ ತಳಕು ಹಾಕಿ ಕೊಂಡಿದೆ. ಎಸ್ಐಟಿ ವಿಚಾರಣೆಯಲ್ಲಿ ಈ ದೂರುದಾರ ನೀಡಿದ ಮಾಹಿತಿಯ ಪ್ರಕಾರ, ಶವಗಳನ್ನು ಹೂತಿಟ್ಟ ಕಾರ್ಯದಲ್ಲಿ ಅಂದು ಪೊಲೀಸ್ ಅಧಿಕಾರಿಯೂ ಸಾಥ್ ನೀಡಿದ್ದರು. ಪ್ರಕರಣ ಸಂಬಂಧ ಈಗ ಆ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಿಷಯ ಬಹಿರಂಗವಾಗುತ್ತಿದ್ದಂತೆ, ಸಂಬಂಧಿತ ಅಧಿಕಾರಿ ಈ ವಿಷಯವನ್ನ ತಿಳಿದು ವಿಚಾರಣೆಗೆ ಒಳಗಾಗುವ ಭಯದಿಂದ, ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
1995 ರಿಂದ ಕೆಲಸ ಮಾಡಿದ ಎಲ್ಲಾ ಪೊಲೀಸರ ಪಟ್ಟಿಯನ್ನು ಕೇಳಿದ ಎಸ್.ಐ.ಟಿ
ಈ ಪ್ರಕರಣ ಸಂಬಂಧ ಧರ್ಮಸ್ಥಳ ಔಟ್ ಪೋಸ್ಟ್ನ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಪಟ್ಟಿಯನ್ನು ಹುಡುಗಾಡಿ, 1995 ರಿಂದ ಕೆಲಸ ಮಾಡಿದ ಎಲ್ಲಾ ಪೊಲೀಸರ ಪಟ್ಟಿಯನ್ನು ಎಸ್.ಐ.ಟಿ ಕೇಳಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಲಿಸ್ಟ್ ಗಾಗಿ ಎಸ್ಐಟಿ ರಿಕ್ವೆಸ್ಟ್ ಲೆಟರ್ ಕೊಟ್ಟಿದೆ.
ಉತ್ಪನನ ಕಾರ್ಯಾಚರಣೆಗೆ ತೀವ್ರ ಗತಿ: ಮೂರು ತಂಡಗಳ ರಚನೆಒಟ್ಟಾರೆಯಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಬೇರೆ ಬೇರೆ ತಾಲೂಕುಗಳ ತಹಶೀಲ್ದಾರ್ಗಳ ಸಮ್ಮುಖದಲ್ಲಿ, ಮೂರು ಸಮಾಧಿಗಳನ್ನು ಏಕಕಾಲದಲ್ಲಿ ಅಗೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕೆಲಸಕ್ಕೆ ಸರ್ಕಾರಿ ಪಂಚರು ಹಾಗೂ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಹೆಚ್ಚಿನ ಎಚ್ಚರಿಕೆ ಹಿನ್ನೆಲೆಯಲ್ಲಿ ಜೆಸಿಬಿ ಬಳಕೆಯನ್ನು ತಾತ್ಕಾಲಿಕವಾಗಿ ತಿರಸ್ಕರಿಸಲಾಗಿದ್ದು, ಮಾನವ ಶ್ರಮದ ಮೂಲಕವೇ ಸಮಾಧಿಗಳ ಉತ್ಪನನ ನಡೆಸಲು ತೀರ್ಮಾನಿಸಲಾಗಿದೆ. ಅಸ್ತಿಪಂಜರಗಳಿಗೆ ಹಾನಿಯಾಗದಂತೆ ನಿಖರ ಗಮನ ವಹಿಸಲಾಗಿದೆ.
ಒಟ್ಟಾರೆಯಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಬೇರೆ ಬೇರೆ ತಾಲೂಕುಗಳ ತಹಶೀಲ್ದಾರ್ಗಳ ಸಮ್ಮುಖದಲ್ಲಿ, ಮೂರು ಸಮಾಧಿಗಳನ್ನು ಏಕಕಾಲದಲ್ಲಿ ಅಗೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಎಸ್ಐಟಿ ಇಂದಿನ ಉತ್ಪನನ ಕಾರ್ಯಾಚರಣೆಗೆ ಹೆಚ್ಚಿನ ತೀವ್ರತೆ ನೀಡಿದ್ದು, ಈ ಕೆಲಸಕ್ಕೆ ಸರ್ಕಾರಿ ಪಂಚರು ಹಾಗೂ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಹೆಚ್ಚಿನ ಎಚ್ಚರಿಕೆ ಹಿನ್ನೆಲೆಯಲ್ಲಿ ಜೆಸಿಬಿ ಬಳಕೆಯನ್ನು ತಾತ್ಕಾಲಿಕವಾಗಿ ತಿರಸ್ಕರಿಸಲಾಗಿದ್ದು, ಮಾನವ ಶ್ರಮದ ಮೂಲಕ ಸಮಾಧಿಗಳ ಉತ್ಪನನ ನಡೆಸಲು ತೀರ್ಮಾನಿಸಲಾಗಿದೆ. ಅಸ್ತಿಪಂಜರಗಳಿಗೆ ಯಾವುದೆ ಹಾನಿಯಾಗದಂತೆ ಗಮನ ವಹಿಸಲಾಗಿದೆ.
ಹಿಟಾಚಿ ಬಳಕೆ ಕುರಿತು ತೀವ್ರ ಚರ್ಚೆ
ಶವಗಳ ಉತ್ಪನನಕ್ಕೆ ತಂತ್ರಜ್ಞಾನ ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಹಿಟಾಚಿ ಯಂತ್ರ ಬಳಸುವ ಬಗ್ಗೆ ಕಾನೂನು ಹಾಗೂ ವೈಜ್ಞಾನಿಕ ಅಡ್ಡಿಗಳಿವೆ. ಹಿಟಾಚಿ ಬಳಕೆಯಿಂದ ಅಸ್ಥಿಪಂಜರಗಳು ಹಾನಿಯಾಗುವ ಸಾಧ್ಯತೆ ಹೆಚ್ಚಿದ್ದು , ಇದು ಫಾರೆನ್ಸಿಕ್ ಪರೀಕ್ಷೆ ಹಾಗೂ ವರದಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ತೀರ ಅಗತ್ಯವಿದ್ದರೆ ಮಾತ್ರ ಸಂಬಂಧಿತ ಅನುಮತಿಯನ್ನು ಪಡೆದು ಯಂತ್ರ ಬಳಕೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.
ತನಿಖಾ ಅಧಿಕಾರಿಗಳಾದ ಜಿತೇಂದ್ರ ದಯಾಮ್, ಡಿಐಜಿ ಅನುಚೇತ್, ಮತ್ತು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಭೇಟಿ ನೀಡಿ, ಕಾರ್ಯಾಚರಣೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಅನಾಮಿಕ ದೂರುದಾರನಿಂದ ಸೂಚಿಸಲಾದ 13 ಶಂಕಿತ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿಯಲಿದೆ. ಇಂದು ಮುಂಜಾನೆ ನೇತ್ರಾವತಿಯತ್ತ ಎಸ್ಐಟಿ ತಂಡ ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರಯಾಣಿಸಿದ್ದು, ಕೆಲವೇ ಕ್ಷಣಗಳಲ್ಲಿ ಉತ್ಪನನ ಪ್ರಕ್ರಿಯೆ ಆರಂಭವಾಗಲಿದೆ. ಇಂದು ಎರಡಕ್ಕಿಂತ ಹೆಚ್ಚು ಸಮಾಧಿಗಳನ್ನು ಏಕಕಾಲದಲ್ಲಿ ಅಗೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಇದರ ಅನುಮತಿ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರಿಂದ ಸಿಕ್ಕರೆ ಮಾತ್ರ ಸಾಧ್ಯವಾಗಲಿದೆ. ಈ ನಿರ್ಧಾರಕ್ಕೆ ಎಲ್ಲರ ಚಿತ್ತ ನೆಟ್ಟಿದೆ.
2 thoughts on “ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಕೈವಾಡ? Retired cop linked to Dharmasthala burial case?”