---Advertisement---

ತುಮಕೂರು: ಆರೈಕೆ ಮಾಡದೆ ನಿರ್ಲಕ್ಷ್ಯ ತೋರಿದ ಮಕ್ಕಳಿಗೆ ನೀಡಿದ ಆಸ್ತಿ ಹಿಂಪಡೆದ ತಾಯಿ!!!!

On: November 24, 2025 3:48 PM
Follow Us:
---Advertisement---

ತುಮಕೂರು: ವಯೋವೃದ್ಧ ತಾಯಿಗೆ ಆರೈಕೆ ಹಾಗೂ ಮೂಲಭೂತ ಸಹಾಯ ಮಾಡದೆ ನಿರ್ಲಕ್ಷ್ಯ ತೋರಿದ ಮಕ್ಕಳಿಗೆ ನೀಡಿದ್ದ ಆಸ್ತಿಪತ್ರವನ್ನು ರದ್ದುಪಡಿಸಿ, ಜಮೀನನ್ನು ಮರು ತಾಯಿ ಹೆಸರಿಗೇ ವರ್ಗಾಯಿಸುವಂತೆ ಉಪವಿಭಾಗಾಧಿಕಾರಿ ನ್ಯಾಯ ಮಂಡಳಿ ಆದೇಶ ಹೊರಡಿಸಿದೆ. ಈ ಪ್ರಕರಣ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿ, ಮಠ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮಠ ಗ್ರಾಮದ ರಂಗಮ್ಮ ಎಂಬವರು ತಮ್ಮ ಹೆಸರಿನಲ್ಲಿದ್ದ 3 ಎಕರೆ 26 ಗುಂಟೆ ಜಮೀನನ್ನು ಮಕ್ಕಳು ಗುಜ್ಜಾರಪ್ಪ, ಶಿವಣ್ಣ ಮತ್ತು ಹನುಮಂತಯ್ಯ ಇವರಿಗೆ ಆಸ್ತಿಪತ್ರ ಮೂಲಕ ಹಸ್ತಾಂತರಿಸಿದ್ದರು. ಮಕ್ಕಳಿಂದ ನಿರಂತರ ಆರೈಕೆ ಸಿಗುವ ನಂಬಿಕೆಯಿಂದಲೇ ಅವರು ಜಮೀನು ವರ್ಗಾಯಿಸಿದ್ದರು.

ಆದರೆ, ಆಸ್ತಿ ಪಡೆದ ನಂತರ ಮಕ್ಕಳು ತಾಯಿ–ತಂದೆಯ ಆರೋಗ್ಯ, ಆಹಾರ, ಚಿಕಿತ್ಸೆ ಸೇರಿದಂತೆ ಬೇಸಿಕ್‌ ಸೌಲಭ್ಯಗಳನ್ನೂ ಒದಗಿಸದೆ ದೂರವಾಗಿದ್ದಾರೆ ಎಂದು ರಂಗಮ್ಮ ಅವರು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ದೂರು ನೀಡಿದ್ದರು. “ಆಸ್ತಿ ಹಸ್ತಾಂತರವಾದ ಮೇಲೆ ಮಕ್ಕಳು ನಮ್ಮ ಕಡೆ ಗಮನ ನೀಡುವುದೇ ನಿಲ್ಲಿಸಿದ್ದಾರೆ, ಮಾನಸಿಕ ಹಿಂಸೆಗೂ ಒಳಪಟ್ಟಿದ್ದೇವೆ, ದಾನಪತ್ರ ರದ್ದುಪಡಿಸಬೇಕು” ಎಂದು ಅವರು ಮನವಿ ಮಾಡಿದ್ದರು.

ಪರಿಶೀಲನೆಯ ವೇಳೆ ಮಕ್ಕಳು ದಾನಪತ್ರದಲ್ಲಿದ್ದ ಷರತ್ತುಗಳನ್ನು ಪಾಲಿಸದಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ, ಸಹಾಯವಾಣಿ ಕೇಂದ್ರದ ಹಿರಿಯ ಸಮನ್ವಯಾಧಿಕಾರಿ ವಿವರವಾದ ವರದಿಯನ್ನು ಉಪವಿಭಾಗಾಧಿಕಾರಿ ಹಾಗೂ ನಿರ್ವಹಣಾ ನ್ಯಾಯ ಮಂಡಳಿಗೆ ಸಲ್ಲಿಸಿದರು.

ನ್ಯಾಯ ಮಂಡಳಿಯ ಅಧ್ಯಕ್ಷೆ ನಾಹಿದಾ ಜಮ್ ಜಮ್ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ಮೂವರು ಮಕ್ಕಳು ತಾಯಿಗೆ ಅಗತ್ಯ ಆರೈಕೆ ನೀಡದಿರುವುದು ದೃಢಪಟ್ಟಿತು. ಇದರಿಂದ 2021ರ ಡಿಸೆಂಬರ್‌ 23ರಂದು ಮಾಡಲಾಗಿದ್ದ ದಾನಪತ್ರವನ್ನು ‘ಶೂನ್ಯ ಹಾಗೂ ಅನ್ವಯವಲ್ಲದ ದಸ್ತಾವೇಜು’ ಎಂದು ಘೋಷಿಸಿ ರದ್ದುಪಡಿಸಲಾಗಿದೆ.

ರಂಗಮ್ಮ ಅವರ ಹೆಸರಿಗೆ ಜಮೀನು ಮರು ಪಹಣಿ ಮಾಡುವಂತೆ ಗುಬ್ಬಿ ತಹಶೀಲ್ದಾರರಿಗೆ ನ್ಯಾಯ ಮಂಡಳಿ ನಿರ್ದೇಶನ ನೀಡಿದೆ. ಈ ಪ್ರಕರಣವು “ಹಿರಿಯರ ಪೋಷಣೆ ಮತ್ತು ರಕ್ಷಣಾ ಕಾಯ್ದೆ” ಅಡಿಯಲ್ಲಿ ನೀಡಬಹುದಾದ ಕಾನೂನು ಸೌಲಭ್ಯಗಳ ಮಹತ್ವವನ್ನು ಮತ್ತೆ ಒಮ್ಮೆ ನೆನಪಿಸಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment