---Advertisement---

ಮಗಳ ಜನನದ ಸಂಭ್ರಮಕ್ಕೂ ಮುನ್ನವೇ ಯೋದನ ದುರ್ಮರಣ, ಸ್ಟ್ರೆಚರ್ ಮೇಲೆ ಬಂದು ಪತ್ನಿಯಿಂದ ಅಂತಿಮ ದರ್ಶನ..!

On: January 12, 2026 2:19 PM
Follow Us:
---Advertisement---

ಜೀವನದಲ್ಲಿ ನಾವು ಕನಸು ಕಾಣುವುದೊಂದು, ಆದರೆ ವಿಧಿಯ ತೀರ್ಮಾನ ಮತ್ತೊಂದು. ಆ ಕಠೋರ ಸತ್ಯವನ್ನು ಮಹಾರಾಷ್ಟ್ರದಲ್ಲಿ ನಡೆದ ಈ ಮನಕಲಕುವ ದುರ್ಘಟನೆ ಮತ್ತೆ ನೆನಪಿಸಿದೆ. ಒಂದು ಕಡೆ ಮನೆ ತುಂಬಾ ಹೊಸ ಜೀವದ ಆಗಮನದ ಸಂಭ್ರಮ, ಇನ್ನೊಂದು ಕಡೆ ಅದೇ ಸಂಭ್ರಮಕ್ಕೆ ಕಾರಣನಾದ ತಂದೆಯು ಶಾಶ್ವತವಾಗಿ ಕಣ್ಮರೆಯಾಗುವಂತಹ ವಿಧಿಯಾಟ. ಈ ಘಟನೆ ಯಾರ ಹೃದಯವನ್ನಾದರೂ ನೋವಿನಿಂದ ನಲುಗಿಸುತ್ತದೆ.

ಇದನ್ನು ಓದಿ: 200 ರೂಪಾಯಿ ಖರ್ಚಿನ ವಿಚಾರಕ್ಕೆ ಗಂಡ–ಹೆಂಡತಿ ಜಗಳ: ತಾಯಿ ಆತ್ಮಹತ್ಯೆ, ಇಬ್ಬರು ಪುಟ್ಟ ಮಕ್ಕಳು ಅನಾಥ…

ಸಿಕಂದರಾಬಾದ್–ಶ್ರೀನಗರ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ದಾರೆ ಗ್ರಾಮದ ನಿವಾಸಿ ಪ್ರಮೊದ್ ಪರಶುರಾಮ್ ಜಾಧವ್ ಅವರು, ಪತ್ನಿಯ ಹೆರಿಗೆಗಾಗಿ ಸಹಾಯ ಮಾಡಲು ಪಿತೃತ್ವ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಕುಟುಂಬದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು, ಹೊಸ ಬದುಕಿನ ಕನಸುಗಳನ್ನು ಕಟ್ಟಿಕೊಂಡಿದ್ದ ಆ ಯೋಧನ ಜೀವನವು ಅಕಾಲಿಕ ಅಪಘಾತದಲ್ಲಿ ಅಂತ್ಯ ಕಂಡಿತು.

ಇದನ್ನು ಓದಿ:ಡಿಎನ್‌ಎ ಟೆಸ್ಟ್‌ ಮೂಲಕ ಹೊರಬಂದ ಕುಟುಂಬ ರಹಸ್ಯ: ಹೆತ್ತ ತಾಯಿ ಮುಚ್ಚಿಟ್ಟ ಸತ್ಯ ಕೇಳಿ ಮಗಳು ಶಾಕ್!

ವಿಧಿಯ ಕ್ರೂರತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ, ತನ್ನ ಮಗಳು ಈ ಲೋಕಕ್ಕೆ ಕಾಲಿಡುವ ಕೆಲವೇ ಕ್ಷಣಗಳ ಮುನ್ನವೇ ಆ ಯೋಧ ಅಪಘಾತಕ್ಕೆ ಒಳಗಾಗಿದ್ದರು. ಇದರ ನಡುವೆ, ಕೆಲ ದಿನಗಳ ಹಿಂದಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಅವರು, ಒಂದರ ಹಿಂದೆ ಒಂದಾಗಿ ಬಂದ ದುಃಖದ ಹೊಡೆತಗಳನ್ನು ಎದುರಿಸಬೇಕಾಯಿತು ಎಂಬುದು ಇನ್ನಷ್ಟು ವೇದನೆಯನ್ನುಂಟುಮಾಡುತ್ತದೆ.

ವರದಿಗಳ ಪ್ರಕಾರ, ವೈಯಕ್ತಿಕ ಕೆಲಸದ ನಿಮಿತ್ತ ಬೈಕ್‌ನಲ್ಲಿ ತೆರಳುತ್ತಿದ್ದ ಪ್ರಮೊದ್ ಜಾಧವ್ ಅವರ ಮೇಲೆ ಅತಿವೇಗವಾಗಿ ಬಂದ ಕಸದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಭೀಕರ ಢಿಕ್ಕಿಯ ಪರಿಣಾಮವಾಗಿ ಅವರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ತಲೆಗೆ ಗಾಯಗೊಂಡು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಯೋಧನ ಅಂತ್ಯಕ್ರಿಯೆಯ ವೇಳೆ ಕಂಡ ದೃಶ್ಯ ಕಲ್ಲಿನ ಹೃದಯವನ್ನೂ ಕರಗಿಸುವಂತಿತ್ತು. ಹೆರಿಗೆ ಬಳಿಕ ಸ್ಟ್ರೆಚರ್ ಮೇಲೆ ಕರೆತರಲಾದ ಪತ್ನಿ, ಮಡಿಲಲ್ಲಿ ಪುಟ್ಟ ಮಗು, ಕಣ್ಣಲ್ಲಿ ಅಶ್ರು, ಮನಸ್ಸಿನಲ್ಲಿ ಅಸಹನೀಯ ನೋವಿನೊಂದಿಗೆ ಪತಿಯ ಅಂತಿಮ ದರ್ಶನ ಪಡೆದರು. ಆ ಕ್ಷಣವನ್ನು ಕಂಡ ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಕುಸಿದರು.

ಪ್ರಮೊದ್ ಜಾಧವ್ ಅವರ ಅಂತ್ಯಕ್ರಿಯೆ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅಧಿಕಾರಿಗಳು, ಮಾಜಿ ಸೈನಿಕರು, ಗ್ರಾಮಸ್ಥರು ಹಾಗೂ ಬಂಧುಗಳು ದೊಡ್ಡ ಸಂಖ್ಯೆಯಲ್ಲಿ ಸೇರಿ ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಈ ದುರ್ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಯೋಧರ ತ್ಯಾಗ ಮತ್ತು ಅವರ ಕುಟುಂಬಗಳು ಅನುಭವಿಸುವ ಅಳಲನ್ನು ಮತ್ತೊಮ್ಮೆ ದೇಶದ ಮುಂದೆ ತಂದು ನಿಲ್ಲಿಸಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment