ಹಾಸನ ಜಿಲ್ಲಾ ಆಸ್ಪತ್ರೆಗೆ ಸೇರಿದ ವೈದ್ಯರು ದೊಡ್ಡ ತಪ್ಪು ಮಾಡಿದ್ದು, ಜೋತಿಗೆ ಅಗತ್ಯವಿದ್ದ ಎಡಗಾಲಿನ ಶಸ್ತ್ರಚಿಕಿತ್ಸೆಯ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದರು. ಬಳಿಕ ತಮ್ಮ ತಪ್ಪು ಅರಿತು, ಜ್ಯೋತಿಯ ಬಲಗಾಲಿನ ಶಸ್ತ್ರಚಿಕಿತ್ಸೆಯನ್ನು ಸರಿಪಡಿಸಿದರು. ಅಪಘಾತದ ಕಾರಣದಿಂದ ಜ್ಯೋತಿಯ ಎಡಗಾಲಿಗೆ ರಾಡ್ ಅಳವಡಿಸಲಾಗಿದೆ
ಎರಡು ವರ್ಷಗಳ ಹಿಂದೆ ಜ್ಯೋತಿ ಅವರ ಎಡಗಾಲಿಗೆ ರಾಡ್ ಅಳವಡಿಸಲಾಗಿತ್ತು. ನಂತರ ಕಾಲು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಬಂದರು. ಆದರೆ ವೈದ್ಯರು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾದಾಗ, ತಪ್ಪಾಗಿ ಎಡಗಾಲನ್ನು ಕೊಯ್ದು ರಾಡ್ ಅಳವಡಿಸಿದರು. ತಮ್ಮ ತಪ್ಪು ತಿಳಿದ ನಂತರ, ಎಡಗಾಲಿನ ರಾಡ್ ತೆಗೆದು ಹಾಕಿ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಈ ವೈದ್ಯರ ಎಡವಟ್ಟಿನಿಂದಾಗಿ ಜ್ಯೋತಿ ಆಘಾತಕ್ಕೆ ಒಳಗಾಗಿದ್ದಾರೆ. ಅವರು ಚಿಕ್ಕಮಂಗಳೂರು ಜಿಲ್ಲೆಯ ಬೂಚನಹಳ್ಳಿಯ ಕಾವಲು ಗ್ರಾಮದ ನಿವಾಸಿ.
ಎರಡುವರೆ ವರ್ಷದ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದರು. ತೀವ್ರ ಪೇಟ್ಟಾಗಿದ್ದರಿಂದ ವೈದ್ಯರು ಎಡಗಾಲಿಗೆ ಅಳವಡಿಸಿದ್ದರು.ಇತ್ತೀಚಿಗೆ ಕಾಲಿಗೆ ಅಳವಡಿಸಿದ್ದ ರಾಡ್ ನಿಂದ ಜ್ಯೋತಿಗೆ ನೋವು ಕಾಣಿಸಿಕೊಂಡಿತ್ತು.
ಹಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾಕ್ಟರ್ ಸಂತೋಷ್ ಬಳಿಗೆ ತೋರಿಸಿದರು. ಸೆಪ್ಟೆಂಬರ್ 20ರಂದು ಹಾಸನದ ಆಸ್ಪತ್ರೆಗೆ ಜ್ಯೋತಿ ದಾಖಲಾಗಿದ್ದರು. ಜೊತಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದ ಸಂತೋಷ್ ಶಾಸ್ತ್ರ ಚಿಕಿತ್ಸೆಯ ವೇಳೆ ಎಡಗಾಲು ಬದಲು ಬಲಗಾಲು ಕುಯ್ದು ತಡವಟ್ಟು ಮಾಡಿದ್ದಾರೆ ಕಡೆಗೆ ತಮ್ಮ ತಪ್ಪಿನ ಅರಿವಾಗಿ ಎಡಗಾಲಿಗೆ ಅಳವಡಿಸಿದ್ದ ರಾಡ್ ಅನ್ನು ಇದೀಗ ಸಂತೋಷ್ ತೆಗೆದಿದ್ದಾರೆ.






