---Advertisement---

ಚಾಮರಾಜನಗರ: ಲೋನ್ ವಂಚನೆ ಆನ್‌ಲೈನ್ ಸಾಲ ಆಪ್ ಕಪಟದ ಕುರಿತಾಗಿ ಸೆಲ್ಫಿ ವಿಡಿಯೋ ಮಾಡಿ ರಾಜಪ್ಪ ನೇಣಿಗೆ ಶರಣು

On: September 12, 2025 11:48 AM
Follow Us:
ಚಾಮರಾಜನಗರ: ಲೋನ್ ವಂಚನೆ, ಆನ್‌ಲೈನ್ ಸಾಲ ಆಪ್ ಕಪಟದ ಕುರಿತಾಗಿ ಸೆಲ್ಫಿ ವಿಡಿಯೋ ಮಾಡಿ ರಾಜಪ್ಪ ನೇಣಿಗೆ ಶರಣು
---Advertisement---

ಐದು ಲಕ್ಷ ರೂ. ಸಾಲ ನೀಡುವುದಾಗಿ ಭರವಸೆ ನೀಡಿದ ಧನಿ ಕ್ಯಾಪಿಟಲ್ ಆನ್‌ಲೈನ್ ಫೈನಾನ್ಸ್ ಸಂಸ್ಥೆ, ಮುಂಗಡವಾಗಿ 2.38 ಲಕ್ಷ ರೂ. ವಸೂಲಿಸಿ ವಂಚಿಸಿದ ಪರಿಣಾಮ, ಹಣ ಕಳೆದುಕೊಂಡ ಯುವಕ ರಾಜಪ್ಪ ನೇಣು ಬಿಗಿದುಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆಯಲ್ಲಿ ನಡೆದಿದೆ.

ಆನ್‌ಲೈನ್ ಸಾಲ ಆಪ್ ಕಪಟದ ಕುರಿತಾಗಿ ಸೆಲ್ಫಿ ವಿಡಿಯೋ ಮಾಡಿ ರಾಜಪ್ಪ, ತನ್ನ ಸಾವಿಗೆ ಧನಿ ಆಪ್‌ನ ಸಿದ್ದಚಿರಂಗನ್ ಮತ್ತು ಅನಂತ್ ಲೋಹ ಜವಾಬ್ದಾರರು ಎಂದು ಆರೋಪಿಸಿರುವುದು ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ನಿವಾಸಿ ರಾಜಪ್ಪ ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಧನಿ ಕ್ಯಾಪಿಟಲ್ಸ್ ಸಂಸ್ಥೆಯಿಂದ ರಾಜಪ್ಪಗೆ ಕಡಿಮೆ ಬಡ್ಡಿಗೆ 15 ಲಕ್ಷ ಸಾಲ ನೀಡುವುದಾಗಿ ಹೇಳಿತ್ತು. ಆದರೆ ಇದಕ್ಕೂ ಮೊದಲು ಎರಡೂವರೆ ಲಕ್ಷ ನೀಡಬೇಕು ಎಂದು ಕೇಳಿದ್ದರು ಎನ್ನಲಾಗಿದೆ. ಅದರಂತೆ ರಾಜಪ್ಪ ಆನ್ಲೈನ್ ಮೂಲಕ 2.38 ಲಕ್ಷ ರೂಪಾಯಿ ಕಳುಹಿಸಿದ್ದ. ಇದಾಗಿ ಒಂದೆರಡು ದಿನ ಕಳೆದರೂ ಯಾವುದೇ ಅಪ್ಡೇಟ್ ಬಾರದ ಹಿನ್ನಲೆ ಪರಿಶೀಲನೆ ನಡೆಸಿದಾಗ ಇದೊಂದು ವಂಚನೆ ಎಂದು ಗೊತ್ತಾಗಿದೆ.

ಇದರಿಂದ ತೀವ್ರ ಮನನೊಂದ ರಾಜಪ್ಪ ನನ್ನ ಸಾವಿಗೆ ಧಣಿ ಕ್ಯಾಪಿಟಲ್ಸ್ ನ ಅನಂತ್ ಲೂಹ ಚಿಕ್ಕರಂಜನ್ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿನ ನಂತರ ನನ್ನ ಮನೆಯವರಿಗೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದ್ದಾನೆ. ಘಟನಾ ಸಂಬಂದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment