---Advertisement---

ಸಮಸ್ಯೆ ಬಗೆ ಹರಿಸದೆ ಹೋದರೆ ವಿಷ ಕುಡಿದು ಸಾಯುತ್ತೇನೆ ಎಂದು ತಹಸೀಹಲ್ದಾರ್ ಕಚೇರಿ ಮುಂದೆ ರೈತ ಪ್ರತಿಭಟನೆ Bidar Farmer Threatens Suicide Over Compensation

By BIDAR STORIES

Published on:

Follow Us
Bidar Farmer
---Advertisement---

ಸೋಮುವಾರ ಬೆಳಿಗ್ಗೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಹಸೀಲ್ದಾರ್ ಕಚೇರಿ ಎದುರುಗಡೆ ಪ್ರಶಾಂತ ಲಖ್ಮಾಜಿ ಎನ್ನುವ ರೈತ ಸುಮಾರು 50 ವರ್ಷಗಳಿಂದ ತಮ್ಮ ಹೊಲಕ್ಕೆ ಹೋಗುವ ರಸ್ತೆಯ ಸಮಸ್ಯೆ ಅಧಿಕಾರಿಗಳಿಗೆ ಹೇಳಿಕೊಂಡರು ಅದರ ಕುರಿತು ಯಾವುದೇ ಪರಿಹಾರ ಕೊಡುತ್ತಿಲ್ಲ ಅದನ್ನು ಬಿಟ್ಟು ಶಾಸಕರ ಬಳಿ ಹೋಗಿ ಅವರ ಹತ್ತಿರ ಹೋಗಿ ಹಾಗೆ ಹೀಗೆ ಎಂದು ಸತಾಯಿಸುತ್ತಿರುವ ಕಾರಣ ಬೇಸರ ಗೊಂಡ ರೈತ ಕಚೇರಿ ಎದುರುಗಡೆ ಹಗ್ಗ ಮತ್ತು ವಿಷದ ಬಾಟಲಿ ಸಮೇತ ಬಂದು ನನ್ನ ಸಮಸ್ಯೆ ಏನಾದ್ರೂ ಇವತ್ತು ಬಗೆಹರಿಸದಿದ್ದರೆ ನಾನು ತಹಸೀಲ್ದಾರ ಹೆಸರಿನ ಮೇಲೆ ಪತ್ರ ಪರದು ಆತ್ಮಹತ್ತೆ ಮಾಡಿಕೊಳ್ಳುದಾಗಿ ಮಾಧ್ಯಮದ ಮುಂದೆ ಅಳಲು ತೋರಿಕೊಂಡ ರೈತ.

ಅಧಿಕಾರಿಗಳ ನಿರ್ಲಕ್ಷತನದಿಂದ ಬೇಸತ್ತ ರೈತ ಶಾಸಕ ಶರಣು ಸಲಗರ ಮೊರೆ ಹೋಗಿದ್ದು ನಾಲ್ಕು ದಿನಗಳಲ್ಲಿ ಕೆಲಸ ಮಾಡಿಸುತ್ತೇನೆ ಹೇಳಿದ್ದರು ಎಂದು ಹೇಳಿಕೆ ಕೊಟ್ಟ ರೈತ. ಇದೇ ರೀತಿ ಮುಂದೂ ವರೆದರೆ ನಾವು ನಮ್ಮ ದನ ಕರುಗಳು ಹಾಗೆ ರಾಶಿ ಸಮಯದಲ್ಲಿ ಹೇಗೆ ಸಾಗಟನೆ ಮಾಡ್ಬೇಕು ಎಂದು ಮಧ್ಯಮ ಮಿತ್ರರೊಂದಿಗೆ ನೋವನ್ನು ಹಂಚಿಕೊಂಡ ರೈತ.

10 ರಿಂದ 15 ಜನ ರೈತರ ಹೊಲಕ್ಕೆ ಹೋಗಲು ದಾರಿ ಇಲ್ಲದಂತಾಗಿದೆ

ಸರ್ವೆ ನo 233-232 ಸರ್ಕಾರಿ ನಾಲೆ ಇದ್ದು ಆ ಜಾಗದಿಂದ ಆದ್ರೂ ನಮ್ಮ ಹೊಲಕ್ಕೆ ಹೋಗುವುದಕ್ಕೆ ಪಕ್ಕದ ರೈತ ದಾರಿ ಬಿಡುತ್ತಿಲ್ಲ ಅದೇ ಜಾಗದಲ್ಲಿ ಗಾರೆ ಹೊಡೆದು ಪೈಪ್ ಗಳನ್ನು ಹಾಕಿ 50 ವರ್ಷದಿಂದ ಬಳಸುತ್ತಿರುವ ದಾರಿ ಮುಚ್ಚಿದ್ದಾನೆ ಕೇಳಿದ್ದಕ್ಕೆ ಅದನ್ನು ತಕ್ಷಣವೆ ತೆರವು ಗೊಳಿಸಿ ಎಂದು ಸಂಭಂದ ಪಟ್ಟ ತಹಶೀಲ್ದಾರ್ ಅವರಿಗೆ ದೂರು ಕೊಟ್ಟರೂ ಇವತ್ತು ನಾಳೆ ಎಂದು ಹೇಳುತ್ತಿದ್ದಾರೆ ಈ ದಾರಿಯಿಂದ ಸುಮಾರು 10 ರಿಂದ 15 ಜನ ರೈತರ ಹೊಲಕ್ಕೆ ಹೋಗಲು ದಾರಿ ಇಲ್ಲದಂತಾಗಿದೆ ಎಂದು ತಹಸೀಲ್ದಾರ ವಿರುದ್ಧ ಅಸಮಾಧಾನ ಹೊರಹಾಕಿದ ರೈತ.

---Advertisement---

1 thought on “ಸಮಸ್ಯೆ ಬಗೆ ಹರಿಸದೆ ಹೋದರೆ ವಿಷ ಕುಡಿದು ಸಾಯುತ್ತೇನೆ ಎಂದು ತಹಸೀಹಲ್ದಾರ್ ಕಚೇರಿ ಮುಂದೆ ರೈತ ಪ್ರತಿಭಟನೆ Bidar Farmer Threatens Suicide Over Compensation”

Leave a Comment