---Advertisement---

ಬೀದರ್‌ ಭಾರಿ ಮಳೆಗೆ ಒಡೆದ ಬಸವಕಲ್ಯಾಣದ ಐತಿಹಾಸಿಕ ತ್ರಿಪುರಾಂತ ಕೆರೆ

On: September 27, 2025 3:33 PM
Follow Us:
---Advertisement---

ಬಸವಕಲ್ಯಾಣ ತಾಲ್ಲೂಕಿನ ಐತಿಹಾಸಿಕ ತ್ರಿಪುರಾಂತ ಕೆರೆ ಎರಡು ದಿನಗಳ ನಿರಂತರ ಭಾರಿ ಮಳೆಯಿಂದ ಶನಿವಾರ ಒಡೆದುಹೋಯಿತು. ಕೆರೆಯ ಬಂಡೆ ಕುಸಿದ ಪರಿಣಾಮ ಅಪಾರ ಪ್ರಮಾಣದ ನೀರು ಏಕಾಏಕಿ ಹೊರಬಂದು ಸುತ್ತಮುತ್ತಲಿನ ಹಳ್ಳಿಗಳಿಗೆ ನುಗ್ಗಿ ದೊಡ್ಡ ಪ್ರಮಾಣದ ಹಾನಿ ಉಂಟುಮಾಡಿದೆ. ಗೌರ, ಪ್ರತಾಪುರ, ಖಾನಾಪುರ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು, ಜನರು ಸಂಚಾರಕ್ಕೆ ದೊಡ್ಡ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಗ್ರಾಮಗಳ ಕೃಷಿ ಜಮೀನುಗಳು ನೀರಿನಲ್ಲಿ ಮುಳುಗಿದ ಪರಿಣಾಮ ಬೆಳೆಗಳು ಹಾನಿಗೊಳಗಾಗಿದ್ದು, ರೈತರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಮುಳುಗಿದ ಪ್ರದೇಶಗಳಲ್ಲಿ ತಡೆಗೋಡೆಗಳನ್ನು ಹಾಕಿ ಸಂಚಾರ ನಿಲ್ಲಿಸಿದರು. ಶಾಸಕ ಶರಣು ಸಾಲಗರ್ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿ, ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೆ ಸ್ಥಳೀಯರು ಸರ್ಕಾರದಿಂದ ತುರ್ತು ಆಶ್ರಯ, ಆಹಾರ, ಕುಡಿಯುವ ನೀರು ಹಾಗೂ ವೈದ್ಯಕೀಯ ನೆರವು ಸಿಗಬೇಕೆಂದು ಒತ್ತಾಯಿಸಿದ್ದಾರೆ.

Join WhatsApp

Join Now

RELATED POSTS