---Advertisement---

ಧರ್ಮಸ್ಥಳ ಬುರುಡೆ ಪ್ರಕರಣ: ಮೋದಿ ಸರ್ಕಾರ ಧರ್ಮಾಧಿಕಾರಿ ಬೆಂಬಲದಲ್ಲಿದೆ ಎಂದ ಪ್ರಲ್ಹಾದ ಜೋಶಿ

On: September 2, 2025 8:50 AM
Follow Us:
ಧರ್ಮಸ್ಥಳ ಬುರುಡೆ ಪ್ರಕರಣ: ಮೋದಿ ಸರ್ಕಾರ ಧರ್ಮಾಧಿಕಾರಿ ಬೆಂಬಲದಲ್ಲಿದೆ ಎಂದ ಪ್ರಲ್ಹಾದ ಜೋಶಿ
---Advertisement---

ಕಾಂಗ್ರೆಸ್ ಪಕ್ಷವು ದೇಶದ ಬಹುಸಂಖ್ಯಾತರ ವಿರುದ್ಧ ಯಾವಾಗಲೂ ಕುತ್ತಂತ್ರ ನಡೆಸಿಕೊಂಡೇ ಬಂದಿದೆ. ಧರ್ಮಸ್ಥಳ ವಿವಾದವೂ ಅದೇ ಸರಣಿಯ ಭಾಗವಾಗಿದ್ದು, ಮೋದಿ ಸರ್ಕಾರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬೆಂಬಲದಲ್ಲೇ ನಿಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ಧರ್ಮಸ್ಥಳ ಚಲೋ’ ಸಮಾಜ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಯಾವುದೇ ಒಂದು ವರ್ಗದವರು ಮಾತ್ರವಲ್ಲ, ಎಲ್ಲಾ ವರ್ಗದವರೂ ಆಗಮಿಸುತ್ತಾರೆ. ವಿಶೇಷವಾಗಿ ಹಿಂದುಳಿದ ವರ್ಗದವರು ಅಣ್ಣಪ್ಪಸ್ವಾಮಿಗೆ ಪ್ರಣಾಮ ಮಾಡಿ, ಮಂಜುನಾಥೇಶ್ವರನಿಗೆ ಮುಡಿ ಕೊಡುವ ಪದ್ಧತಿ ಪೀಳಿಗೆಗಳಿಂದ ನಡೆದು ಬಂದಿದೆ. ಆದರೆ ಇಂದು ಬುರುಡೆ ಪ್ರಕರಣವನ್ನು ನೆಪವನ್ನಾಗಿ ಮಾಡಿ, ಹಿಂದೂ ಸಮಾಜವನ್ನು ವಿಭಜಿಸುವ ಕುತಂತ್ರವೇ ಧರ್ಮಸ್ಥಳ ಪ್ರಕರಣದ ಹಿಂದಿದೆ ಎಂದು ಎಚ್ಚರಿಕೆ ನೀಡಿದರು.

ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿಯ ಆರಾಧನೆಯ ಪ್ರಭಾವವನ್ನು ಕುಗ್ಗಿಸುವ ಪ್ರಯತ್ನ ನಡೆದಿದೆ. ಹಿಂದೂಗಳಲ್ಲಿ ಕ್ಷೇತ್ರದ ಮೇಲೆ ಇರುವ ಭಕ್ತಿ ಮತ್ತು ನಂಬಿಕೆಯನ್ನು ದುರ್ಬಲಗೊಳಿಸುವ ಕುತಂತ್ರ ಇದಾಗಿದೆ. ಜೊತೆಗೆ, ಹಿಂದೂ ಸಮಾಜವನ್ನು ವಿಭಜಿಸುವ ಶಡ್ಯಂತ್ರವೂ ನಡೆಯುತ್ತಿದೆ ಎಂದು ಸಚಿವ ಜೋಶಿ ಆರೋಪಿಸಿದರು.

ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಏಕೆ ಎಸ್‌ಐಟಿ ರಚನೆ ಮಾಡಿತು? ಎಂದು ಸಚಿವರು ಪ್ರಶ್ನಿಸಿದರು. ಮೊದಲು ಬುರುಡೆ ತಂದವನನ್ನು ಬಂಧಿಸಿ ಶಿಕ್ಷೆ ನೀಡಬೇಕಾಗಿತ್ತು. ಬುರುಡೆ ಎಲ್ಲಿಂದ ತಂದೆಂದು ಅವನ ಬಾಯಿಂದಲೇ ಹೇಳಿಸಿಕೊಂಡಿದ್ದರೆ ಸತ್ಯ ಬಹಿರಂಗವಾಗುತ್ತಿತ್ತು. ಇಷ್ಟೆಲ್ಲಾ ನಾಟಕ ಏಕೆ ಬೇಕು? ಎಂದು ರಾಜ್ಯ ಸರ್ಕಾರವನ್ನು ಅವರು ತೀವ್ರವಾಗಿ ಗದರಿಸಿದರು.

ರಾಜ್ಯ ಸರ್ಕಾರ ಬುರುಡೆ ತಂದವನ ವಿಚಾರಣೆ ಮಾಡದೇ, ತನಿಖೆಯನ್ನೂ ನಡೆಸದೆ, ತುರ್ತುಗತಿಯಲ್ಲಿ ಎಸ್‌ಐಟಿ ರಚಿಸಿತು. ಏನಪ್ಪಾ ಕಾರಣಕ್ಕೆ ಹೀಗೆ ಮಾಡಿದಿರಿ? ಮೂರು ಹಿರಿಯ ಅಧಿಕಾರಿಗಳನ್ನು ನೇಮಿಸಿ, ಬಾಹುಬಲಿ ಬೆಟ್ಟ ಅಗೆಸಿದಿರಿ. ಧೈರ್ಯವಿದ್ದರೆ ಬೇರೆ ಶ್ರದ್ಧಾಕೇಂದ್ರಗಳನ್ನೂ ಹೀಗೇ ಅಗೆಸೋಣವೆಂದು ಸಚಿವ ಪ್ರಲ್ಹಾದ ಜೋಶಿ ಸರ್ಕಾರಕ್ಕೆ ಸವಾಲು ಎಸೆದರು.

ಪುರಾತನ ಹಿಂದೂ ಸಂಪ್ರದಾಯ ಹೊಂದಿದ ಧರ್ಮಸ್ಥಳವನ್ನು, ಒಬ್ಬ ಅಸಂಬದ್ಧ ವ್ಯಕ್ತಿಯ ಹೇಳಿಕೆಗೆ ಮಾತ್ರ ನಂಬಿ, ರಾಜ್ಯ ಸರ್ಕಾರ ತೋಡಿಸಿ ಹಾಕಿತು. ಒಂದೆರಡು ಜಾಗವಲ್ಲ, 17 ಸ್ಥಳಗಳವರೆಗೂ ಅಗೆಸಿದರೂ ಫಲಿತಾಂಶ ಸಿಗದೆ ಕೊನೆಗೆ ಜನ ಆಕ್ರೋಶದಿಂದ ಹಿಂತೆಗೆದುಕೊಳ್ಳಬೇಕಾಯಿತು. ಹಾಗಿದ್ದರೆ ಕಾಂಗ್ರೆಸ್ ಸರ್ಕಾರದ ಬುರುಡೆ ನಿಜವಾಗಿ ಏನು ಹೇಳುತ್ತದೆ? ಎಂದು ಪ್ರಶ್ನೆ ಎತ್ತಿದರು.

ಹಿಂದೂ ಸಮಾಜವನ್ನು ನಿರ್ಲಕ್ಷಿಸುವುದು, ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದು ಕಾಂಗ್ರೆಸ್ ಪಕ್ಷದ ಸಂಸ್ಕಾರವಾಗಿಬಿಟ್ಟಿದೆ. ಈ ಪಕ್ಷ ಸದಾ ಹಿಂದೂಗಳ ವಿರುದ್ಧ ನಿಂತು, ಮತಬ್ಯಾಂಕ್ ರಾಜಕಾರಣಕ್ಕಾಗಿ ಪಾಕಿಸ್ತಾನದ ಪರವಾಗಿ ಮಾತನಾಡಿದ ಇತಿಹಾಸ ಹೊಂದಿದೆ ಎಂದು ಪ್ರಲ್ಹಾದ ಜೋಶಿ ತೀಕ್ಷ್ಣವಾಗಿ ಟೀಕಿಸಿದರು.

ಶಬರಿಮಲೆ ಮೇಲೆ ಮೊದಲು ದಾಳಿ ನಡೆದಿತ್ತು, ಈಗ ಧರ್ಮಸ್ಥಳವೇ ಗುರಿಯಾಗಿದೆ. ಆದರೆ ಹಿಂದೂಗಳು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ದೇಶದ ಹಿತಕ್ಕಾಗಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಲವಾಗಿ ನಿಂತಿದೆ, ಅದು ಹಿಂದೂಗಳ ಪರವಾಗಿ ಸದಾ ಕಾವಲುಗಾರವಾಗಿರುತ್ತದೆ ಎಂದು ಹೇಳಿದರು.

ಮೈಸೂರು ಚಾಮುಂಡೇಶ್ವರಿ ಬೆಟ್ಟ ಹಿಂದೂಗಳದ್ದೇ ಅಲ್ಲ ಎಂದು ಕೆಲವರು ಹೇಳುತ್ತಿರುವುದು ದುಃಖಕರ. ಡಿಸಿಎಂ ಡಿಕೆ ಶಿವಕುಮಾರ್ ಇದನ್ನು ಮುಜರಾಯಿ ಇಲಾಖೆಗೆ ಸೇರಿಸುವ ಬಗ್ಗೆ ವಾದ ಮುಂದಿಟ್ಟಿದ್ದಾರೆ. ಹೀಗೆ ಮುಂದುವರಿದರೆ, ಚಾಮುಂಡಿ ಬೆಟ್ಟವನ್ನೂ ಹೊಡೆದಿಡಲು ಹೊರಟಿದ್ದೀರಾ? ರಾಮನಗರದ ಕಪಾಲಿ ಬೆಟ್ಟವನ್ನು ಏಸು ಬೆಟ್ಟವನ್ನಾಗಿ ಮಾಡಿದಂತೆ ಇದೇ ರೀತಿಯ ಯತ್ನ ಚಾಮುಂಡೇಶ್ವರಿಯ ಮೇಲೂ ನಡೆಯುತ್ತಿದೆಯೇ? ಎಂದು ಜೋಶಿ ಪ್ರಶ್ನಿಸಿದರು.

ಮೈಸೂರು ದಸರಾ ಉದ್ಘಾಟನೆಗೆ ತಯಾರಾಗಿರುವ ಬಾನು ಮುಷ್ತಾಕ್‌ ಮೊದಲು ಭುವನೇಶ್ವರಿ ಮಾತೆ ಮತ್ತು ಚಾಮುಂಡೇಶ್ವರಿ ಮಾತೆಯನ್ನು ಸ್ವೀಕರಿಸಿ, ಅವರಿಗೆ ತಲೆಬಾಗುತ್ತೇನೆಂದು ಘೋಷಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದರು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment