---Advertisement---

ಬೆಂಗಳೂರು ಗ್ರಾಮಾಂತರ: ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ ಯತ್ನ, ಪತಿ ಮತ್ತು ಇಬ್ಬರು ಮಕ್ಕಳ ಸಾವು, ತಾಯಿ ಜೀವಂತ

On: September 14, 2025 2:57 PM
Follow Us:
---Advertisement---

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದ ದಾರುಣ ಘಟನೆ ಜನರನ್ನು ಕಂಗೊಳಿಸಿದೆ. ಗೊಣಕನಹಳ್ಳಿ ಗ್ರಾಮದ ಒಂದೇ ಕುಟುಂಬದ ನಾಲ್ವರು ಬದುಕು ಅಂತ್ಯಗೊಳಿಸಲು ಯತ್ನಿಸಿದ್ದು, ಈ ದುಃಖಕರ ಘಟನೆ ಮೂವರ ಜೀವ ಕಸಿದುಕೊಂಡಿದೆ. ಪತಿ ಶಿವು ಹಾಗೂ ಇಬ್ಬರು ಮಕ್ಕಳೇ ಪ್ರಾಣ ಕಳೆದುಕೊಂಡರೆ, ಪತ್ನಿ ಮಂಜುಳಾ ಮಾತ್ರ ಬದುಕುಳಿದಿದ್ದಾರೆ. ಕುಟುಂಬದ ಆತುರದ ನಿರ್ಧಾರವು ಇಂತಹ ದುರಂತಕ್ಕೆ ಕಾರಣವಾಗಿದೆ.

32 ವರ್ಷದ ಶಿವು ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಚಿಕಿತ್ಸೆಗೆ ಸಾಲ ಮಾಡಬೇಕಾಯಿತು. ದಿನ ಕೂಲಿಯಿಂದ ಬದುಕುತ್ತಿದ್ದ ಈ ಕುಟುಂಬಕ್ಕೆ ಸಾಲದ ಭಾರ ದೊಡ್ಡ ಸಂಕಟವಾಯಿತು. ಗಂಡನಿಗೆ ಪೂರ್ಣವಾಗಿ ಚೇತರಿಸಿಕೊಳ್ಳಲು ಹೆಚ್ಚು ಕಾಲ ಬೇಕಾದ್ದರಿಂದ, ಆಗುವವರೆಗೂ ಜೀವನ ಸಾಗಿಸಲು ಸಾಧ್ಯವಾಗದೆ ಕಷ್ಟ ಹೆಚ್ಚಾಗುತ್ತಿತ್ತು. ಸಾಲದ ಬಾಧೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಕ್ಕಳ ಆರೈಕೆ ಹಾಗೂ ಆಹಾರಕ್ಕೆ ಸಹ ಪರದಾಡುವ ಪರಿಸ್ಥಿತಿ ಎದುರಾಯಿತು. ಇಂತಹ ಗಂಭೀರ ಸಂಕಷ್ಟದಲ್ಲಿ ಸಿಲುಕಿದ ಶಿವು ಮತ್ತು ಮಂಜುಳಾ ದಂಪತಿ ದುಃಖಕರವಾಗಿ ಬದುಕು ಅಂತ್ಯಗೊಳಿಸಲು ತೀರ್ಮಾನಿಸಿದರು.

ಮಕ್ಕಳು ಅನಾಥರಾಗಬಾರದು ಎಂಬ ಆಲೋಚನೆಯಿಂದ ದಂಪತಿ ಕ್ರೂರ ನಿರ್ಧಾರಕ್ಕೆ ತಲುಪಿದ್ದಾರೆ. ನಾವಿಬ್ಬರು ಜೀವ ಅಂತ್ಯಗೊಳಿಸಿದರೆ ಮಕ್ಕಳ ಭವಿಷ್ಯ ಅನಾಥವಾಗುತ್ತದೆ ಎಂಬ ಕಾರಣಕ್ಕೆ, ಮಕ್ಕಳನ್ನೂ ಕೂಡ ಕೊಂದು ನಂತರ ತಾವು ಸಾಯುವ ಯತ್ನ ಮಾಡಿದ್ದಾರೆ. ಈ ವೇಳೆ ಮಂಜುಳಾ ಮೊದಲಿಗೆ ಗಂಡ ಶಿವು ಹಾಗೂ ಮಕ್ಕಳಾದ ಚಂದ್ರಕಲಾ (11) ಮತ್ತು ಉದಯ್ ಸೂರ್ಯ (7) ಅವರನ್ನು ಹಗ್ಗದಿಂದ ಬಿಗಿದು ಕೊಂದಿದ್ದಾರೆ. ನಂತರ ತಾನೂ ಸಹ ಹಗ್ಗದ ಮೂಲಕ ಜೀವ ಬಿಡಲು ಪ್ರಯತ್ನಿಸಿದರೂ, ಹಗ್ಗ ಮುರಿದ ಕಾರಣ ಆಕೆ ಬದುಕುಳಿದಿದ್ದಾಳೆ. ಈ ದುರಂತದಲ್ಲಿ ಗಂಡ ಮತ್ತು ಇಬ್ಬರು ಮಕ್ಕಳು ದುರ್ಮರಣ ಹೊಂದಿದ್ದಾರೆ.

ಮಹಿಳೆಗೆ ಹೊಸಕೋಟೆ ಸರ್ಕಾರಿ ಆಸ್ವತ್ರೆಯಲ್ಲಿ‌ ಚಿಕಿತ್ಸೆ. ಮಹಿಳೆ ಬದುಕು ಅಂತ್ಯಗೊಳಿಸುವ ಪ್ರಯತ್ನದಲ್ಲಿ ಗಾಯಗೊಂಡಿದ್ದಾರೆ. ಹಗ್ಗ ಬಿಗಿದಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇತ್ತ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment